ಶ್ರೀಸಾಯಿ ವಿನಾಯಕ ಫ಼ಿಲಂಸ್ ಲಾಂಛನದಲ್ಲಿ ಬಿ.ವಿಜಯಕುಮಾರ್ ಅವರು ನಿರ್ಮಿಸುತ್ತಿರುವ ‘ಸ್ವಚ್ಛಭಾರತ ಚಿತ್ರಕ್ಕಾಗಿ ಪಂಚಾಂಗಂ ಗಿರಿ ಅವರು ಬರೆದಿರುವ ‘ನಾವು ಸಿಕ್ಸ್ಟಿ ಪ್ಲಸ್ ಯುವಕರು ಎಂಬ ಹಾಡಿನ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆದಿದೆ. ಶಿವರಾಮಣ್ಣ, ಎಂ.ಎಸ್.ಉಮೇಶ್, ರಮೇಶ್ಭಟ್, ಸುಂದರರಾಜ್ ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಬಿ.ಆರ್.ಕೇಶವ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪ್ರಮೋದ್ ಅವರ ಛಾಯಾಗ್ರಹಣವಿದೆ. ಎಂ.ಎಸ್.ಮಾರುತಿ ಸಂಗೀತ ನಿರ್ದೇಶನ ಹಾಗೂ ಸಿದ್ದರಾಜು ಅವರ ಸಂಕಲನವಿರುವ ಈ ಚಿತ್ರಕ್ಕೆ ಶೇಷಗಿರಿ ಸಂಭಾಷಣೆ ಬರೆದಿದ್ದಾರೆ.
ಶಿವರಾಮಣ್ಣ, ಉಮೇಶ್ ಬಣಕಾರ್, ರಮೇಶ್ಭಟ್, ಎಂ.ಎಸ್.ಉಮೇಶ್, ಸುಂದರರಾಜ್, ಸ್ವಯಂವರ ಚಂದ್ರು, ರೇಣು, ಶರಾರ, ಕರಿಸುಬ್ಬು, ಪ್ರಜ್ವಲ್ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.